Posts

Showing posts from August, 2020

ತೆಂಗಿನ ಮರದ ಶತ್ರು ಹಂತಕ ಕೆಂಪುಮೂತಿ ದುಂಬಿಯ(RPW) ಬಗೆಗಿನ ಮಾಹಿತಿ ಇಲ್ಲಿದೆ

Image
ತೆಂಗಿನ ಮರ ನೆಟ್ಟು 10 ವರ್ಷ ಆಗಿತ್ತು . ಫಸಲು  ಕೊಡಲು ಆರಂಭ ಆಗುವ ಸಮಯ ಇದ್ದಕ್ಕಿದ್ದ೦ತೆ  ತೆಂಗಿನ ಮರ ಧರೆಗೆ ಉರುಳಿ ಬಿತ್ತು. ಇದಕ್ಕಿಂತ ಮೊದಲು 2 ತೆಂಗಿನಮರ ಇದೇ ರೀತಿ ಬಿದ್ದಿತ್ತು. ಆದ್ರೆ ಅದರಬಗ್ಗೆ ಅಷ್ಟು ತಲೆ ಕೊಳ್ಳಲಿಲ್ಲ. ಆದ್ರೆ ವರ್ಷಕ್ಕೆ ಒಂದು ಮರ ಬೀಳುತ್ತಿರುವಾಗ ಅದರ ಬಗ್ಗೆ ಗಮನಹರಿಸದೆ ಇರಲು ಸಾಧ್ಯವಾಗಲಿಲ್ಲ. ತೆಂಗಿನ ಮರ ಬೀಳಲು ಕಾರಣ ಹುಡುಕುತ್ತಾ ಹೊರಟಾಗ ಸಿಕ್ಕಿದ್ದು  ಕೆಂಪು ಮೂತಿ ದುಂಬಿ (red palm weevil) . ಈ ದುಂಬಿ ಮರಕ್ಕೆ ಆದ ಗಾಯ ವನ್ನು  ಗಮನಿಸಿ, ಗಾಯದಲ್ಲಿ ಮೊಟ್ಟೆ ಇಟ್ಟು  ನಂತರ ಮೊಟ್ಟೆ ಯಿಂದ ಲಾರ್ವ ಹೊರ ಬಂದು ನಂತರ ಹುಳಗಳು ತೆಂಗಿನ ಮರದ ಕಾಂಡ ಮತ್ತು ಬೇರು ಗಳನ್ನು ನಾಶ ಮಾಡುತ್ತದೆ. ಇದೇ ಹುಳ ಕೆಲವೇ ದಿವಸಗಳಲ್ಲಿ ಕೆಂಪುಮೂತಿ ದುಂಬಿಗಳಾಗುವುದು. ಇವುಗಳೇ ತೆಂಗಿನ ಮರ ಬೀಳಲು ಕಾರಣ. ಮಳೆಗಾಲದಲ್ಲಿ ಇದರ ಹಾವಳಿ ಜಾಸ್ತಿ. ಕಾಂಡ ಕೊರೆದು ನಾರನ್ನು ತುಂಡು ಮಾಡಿ ಅದರನ್ನು ಮೊಟ್ಟೆಯಾಕರವಾಗಿ ಮಾಡಿ ಅದರೊಳಗೆ ಈ ಹುಳ ಮತ್ತು ದುಂಬಿ ಇರುತ್ತದೆ.ಈ ಹುಳ ಗೊಬ್ಬರದ ಹುಳುವನ್ನು(ಕಪ್ಪು ಮೂತಿ) ಹೋಲುವಂತೆ ಇದ್ದು.  ಇದರ ಮೂತಿ ಕೆಂಪಗೆ ಇದೆ.

ಗೌರಿ ಗಣೇಶ ಹಬ್ಬದ ಆಚರಣೆ ಹಿಂದಿನ ಮಹತ್ವ ಏನು? |ಇಲ್ಲಿದೆ ಸಂಕ್ಷಿಪ್ತ ಮಾಹಿತಿ

Image
 ಸ್ವಾತಂತ್ರ್ಯ  ಪೂರ್ವದಲ್ಲಿ ಖಾಸಗಿಯಾಗಿ ನಡೆಯುತ್ತಿದ್ದ ಚೌತಿ ಸಂಭ್ರಮಕ್ಕೆ ಅಂದು ದೇಶಪ್ರೇಮಿಗಳಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಲು 1893ರಲ್ಲಿ ಬಾಲಗಂಗಾಧರ್‌ ತಿಲಕ್‌ ಮಹಾರಾಷ್ಟ್ರದಲ್ಲಿ ಅದಕ್ಕೊಂದು ನೂತನ ಸ್ವರೂಪ ನೀಡಿದ್ದರು. ಬಳಿಕ ಗಣೇಶನ ಹಬ್ಬ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿ ರಾಷ್ಟ್ರೀಯ ಹಬ್ಬವಾಗಿರುವುದು ಇತಿಹಾಸ.  ಗಣೇಶ   ಚತುರ್ಥಿ   ಇಂದು ಸಾಂಸ್ಕೃತಿವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವ ಪಡೆದುಕೊಂಡಿದೆ. ಗಣೇಶ ಚೌತಿ ಹಿಂದೂಗಳ ಪವಿತ್ರ ಹಬ್ಬ. ಶ್ರೀ ವರಸಿದ್ದಿ ವಿನಾಯಕ ವ್ರತ ಆಚರಿಸುವ ದಿನ ಭಾದ್ರಪದ ಮಾಸದ ಶುಕ್ಲ ಚತುರ್ಥಿಯು ಶ್ರೀ ಗಣೇಶನ ಜನ್ಮ ದಿನ ಎನ್ನಲಾಗುತ್ತದೆ. ಹೀಗಾಗಿ ಇದು ಧಾರ್ಮಿಕ ಮಹತ್ವವಿರುವ ವಿಶೇಷ ಪೂಜಾ ಸಂದರ್ಭ. ಗಣೇಶ ಹಬ್ಬ ಇಷ್ಟೆಲ್ಲಾ ಇತಿಹಾಸ ಮತ್ತು ಮಹತ್ವ ಪಡೆದುಕೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರಾದ್ಯಂತ ಕೇವಲ ಆಡಂಬರಕ್ಕೆ ಮತ್ತು ಪ್ರತಿಷ್ಟೆಗೆ ಮಾತ್ರ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಇದರಿಂದ ಗಣೇಶ ಹಬ್ಬದ ಮಹತ್ತರ ವಿಷಯಗಳು ಮರೆಯಾಗುತ್ತಿವೆ. ಇಂದಿನ ಯುವಕರಿಗೆ ಗಣೇಶ ಹಬ್ಬವೆಂದರೆ ಕೇವಲ ಮೂರು ದಿನ ಕಾಲ ಕಳೆಯುವ ಸಂದರ್ಭ ಅಷ್ಟೆ. ಬ್ರಿಟೀಷ್‌ ಆಳ್ವಿಕೆ ವೇಳೆ ಭಾರತೀಯರನ್ನು ಒಗ್ಗೂಡಿಸಲು ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ‌ ತಿಲಕ್‌ ಗಣೇಶ ಹಬ್ಬ ಆಚರಿಸಲು ಪ್ರಾರಂಭಿಸಿದ್ದರು. ಇಂದಿನ ದಿನ ಗಣೇಶ ಹಬ್ಬದ ನೆಪದಲ...