ಜನವರಿ 17 2023 ರ ರಾತ್ರಿ 8 ರ ನಂತರ ಅಪ್ಪನಿಗೆ ಏನಾಯಿತು??
![]() |
ಸೀತಾರಾಮ ಭಟ್ |
ಬೆಳಿಗ್ಗೆ 9.30 ಸುಮಾರಿಗೆ ತಂದೆ ಯಾವಾಗಲೂ ಕೆಲಸಕ್ಕೆ ಹೋಗುವ ಸಮಯ. ಎಂದಿನಂತೆ ಅಂದೂ ಕೂಡಾ ಪರಪ್ಪು ಗೆ ಮಗನ ಜೊತೆ ಕರೆದು ಕೊಂಡು ಹೋಗಿ ಬಿಟ್ಟು ಬಂದೆ... ಸಂಜೆ 5.45 ತಂದೆ ಬರುವ ಸಮಯ ಅಂದೂ ಎಂದಿನಂತೆ ಕರೆದು ಕೊಂಡು ಮನೆ ಹತ್ತಿರದ ಅಂಗಡಿಯಲ್ಲಿ ಪಿಗ್ಮಿ ಹಣ ಕಲೆಕ್ಟ್ ಮಾಡಲು ಮಗ ಮತ್ತು ತಂದೆಯನ್ನು ಬಿಟ್ಟು ನಾನು ಅಲ್ಲೇ ಹತ್ತಿರದ ಮನೆಯಿಂದ ಹಾಲು ತೆಗೆದು ಕೊಂಡು ಮತ್ತೆ ತಂದೆ ಮತ್ತು ಮಗನನ್ನು ಕರೆದು ಕೊಂಡು ಬಂದು ಮನೆಗೆ ಬಿಟ್ಟೆ.. ಇದೆಲ್ಲ ಎಂದಿನಂತೆ ಇತ್ತು.... ಮನೆಗೆ ತಂದೆ ಮತ್ತು ಮಗನನ್ನು ಬಿಟ್ಟು ನಮ್ಮ ನೆರೆ ಮನೆಯವರ ಬೈಕ್ ನೋಡಲು ಹೋಗಿದ್ದೆ.. ನಮ್ಮ ಸ್ಕೂಟರ್ ಕೊಟ್ಟು ಬೈಕ್ ತೆಗೆಯುವ ಯೋಚನೆ ಇತ್ತು. ಅಲ್ಲಿಂದ ಮನೆಗೆ ಬರುವಾಗ ಸಮಯ ಸುಮಾರು 8ಗಂಟೆ.. ಈ ಸಮಯ ತಂದೆ ಹೊಟ್ಟೆ ಹತ್ತಿರ ನೋವು ಅಂತಿದ್ದರು.. ಅದು ಗ್ಯಾಸ್ಸ್ಟ್ರಿಕ್ ನಿಂದಾ ಆಗಿರಬಹುದು ಅಂದುಕೊಂಡೆವು. ಜೊತೆಗೆ ತೇಗು ಕೂಡ ಬರುತಿತ್ತು. ಕೂಡಲೇ ಡಾಕ್ಟರ್ ನ ಬಳಿ ಕರೆದು ಕೊಂಡು ಹೋಗುವ ಅಂದೆ ಅಮ್ಮನಲ್ಲಿ.. ತಂದೆ ಕೂಡ ಹೊರಟರು. ತಮ್ಮ ಡಾಕ್ಟರಿಗೇ ಫೋನ್ ಮಾಡಿದ.. ಡಾಕ್ಟರ್ ಕ್ಲಿನಿಕ್ ನಲ್ಲಿ ಇಲ್ಲ ಅಂದರು.. ಹಾಗಾದ್ರೆ ಮನೆಗೆ ಬರಲೇ ಅಂದ ತಮ್ಮ.. ಡಾಕ್ಟರ್ ಬನ್ನಿ ಅಂದ್ರು... ಕೂಡಲೇ ಮನೆಯಿಂದ ಹೊರಟೆವು.. ದಾರಿಯಲ್ಲಿ ತಂದೆಯ ಜೊತೆ ಮಾಮೂಲು ಹರಟೆ ತಮಾಷೆ ಇತ್ತು.. ತಂದೆ ಕೂಡ ಆರಾಮದಲ್ಲಿ ಇದ್ದರು.. ಮನೆಯಲ್ಲಿ ಇದ್ದ ನೋವು ಉಪ್ಪಿನಂಗಡಿ ಗೆ ತಲುಪುವಾಗ ಇರಲಿಲ್ಲ... ಡಾಕ್ಟರ್ ನ ಮನೆಗೆ ರಾತ್ರಿ 8.15-8.20 ರ ಸುಮಾರಿಗೆ ತಲುಪಿದೆವು.. ಡಾಕ್ಟರ್ನ ಮನೆ ಹೊರಗೆ ಗೇಟ್ ನ ಬಳಿ ನಿತ್ತೇವು. ತಮ್ಮ ಡಾಕ್ಟರ್ ಗೆ ಫೋನ್ ಮಾಡಿ ಒಳ ಬರಬಹುದೇ ಅಂದ (ಯಾಕೆಂದರೆ ರಾತ್ರಿ ನಾಯಿಗಳು ಬಿಡುವ ಸಮಯ) ಡಾಕ್ಟರ್ ಬನ್ನಿ ಆಲ್ಲಿ ಯಾಕೆ ನಿತ್ತಿರಿ ಅಂದ್ರು.. ತಂದೆ ಅರಾಮದಲ್ಲಿ ನಡೆದು ಕೊಂಡು ನಮ್ಮ ಜೊತೆ ಡಾಕ್ಟರ್ ಮನೆ ಒಳಗೆ ಹೆಜ್ಜೆ ಹಾಕಿದರು... ಡಾಕ್ಟರ್ ರನ್ನು ಅವರ ಮನೆಯ ಕ್ಲಿನಿಕ್ ನ ರೂಂ ನಲ್ಲಿ 5 ನಿಮಿಷ ಕಾಲ ಕಾದೆವು.. ಆವಾಗಲೂ ತಂದೆಗೆ ಯಾವುದೇ ನೋವು ಇರಲಿಲ್ಲ. ಡಾಕ್ಟರ್ ಬಂದರು ತಂದೆಯಲ್ಲಿ ಎಂತ ಸೀತಣ್ಣ ಅಂದರು.. ತಂದೆ ಗ್ಯಾಸ್ಟ್ರಿಕ್ ಡಾಕ್ಟ್ರೇ ಅಂದರು.. ಅದಕ್ಕೆ ಡಾಕ್ಟರ್ ಗ್ಯಾಸ್ಟ್ರಿಕ್ ಅಂತ ಹೇಗೆ ಗೊತ್ತಾಯಿತು ಅಂದರು. ಹೊಟ್ಟೆಯ ಬಳಿ ನೋವು ಅಂದರು ತಂದೆ.... ಡಾಕ್ಟರ್ ಹಾರ್ಟ್ಬೀಟ್ ಮತ್ತು bp ಚೆಕ್ ಮಾಡಿ.. ಬಿಪಿ ಸ್ವಲ್ಪ ಜಾಸ್ತಿ ಇದೆ ಅಂದರು.. ಬೇವರುತ್ತಿದ್ದೆಯ ಅಂದರು...ತಂದೆ ಸ್ವಲ್ಪ ಬೆವರುತ್ತಿದೆ ಅಂದರು. ಡಾಕ್ಟರ್ ಒಂದು ಬಾಟಲ್ ಸಿರಪ್ ಮತ್ತು tablet ಹಿಡಿದು ಕೊಂಡು ... ತಂದೆ ಮನೆಯಿಂದ ಹೊರಡುವಾಗ ಗ್ಯಾಸ್ಟ್ರಿಕ್ ಗೆ ಮಾತ್ರೆ ತಿಂದಿದ್ದರು ಅದನ್ನು ಡಾಕ್ಟರ್ ಗೆ ತೋರಿಸಿದರು.. ಡಾಕ್ಟರ್ ಎಸ್ಟು ಹೊತ್ತಿಗೆ ತಿಂದಿರಿ ಅಂದರು.. ಈಗ ಅರ್ದ ಗಂಟೆ ಮೊದಲು ಅಂದರು ತಂದೆ.. ಹಾಗಾದ್ರೆ ಈಗ ಯಾವುದೇ ಮಾತ್ರೆ ಬೇಡ.. ಅವರ ಕೈಯಲ್ಲಿದ್ದ ಸಿರಪ್ ಮತ್ತು ಮಾತ್ರೆಯನ್ನುತಂದೆಯಲ್ಲಿ ಕೊಟ್ಟು.. ಆದ್ರ ತೆಗೆದು ಕೊಳ್ಳುವ ರೀತಿಯ ಬಗ್ಗೆ ಹೇಳಿದ್ರು.. ನಾಳೆ ECG ಮಾಡಿ ಅಂದರು... ಮತ್ತೆ ಸ್ವಲ್ಪ ಸಮಯ ದಲ್ಲಿ ಡಾಕ್ಟರ್ ಸಿರಪ್ ಮತ್ತು ಮಾತ್ರೆ ಯನ್ನು ಪುನ ತಂದೆಯ ಕೈಯಿಂದ ತೆಗೆದು ಕೊಂಡು.. ನಾಳೆ ಬೇಡ ಈವತ್ತೆ ಇಸಿಜಿ ಮಾಡಿಸಿ.. ನಾನು ಶ್ಯಾಮ್ ಭಟ್ ರಲ್ಲಿ ಹೇಳಿರುತ್ತೇನೆ.. ನೀವು ಕೂಡಲೇ ಆದರ್ಶಕ್ಕೆ (ಪುತ್ತೂರು) ಹೋಗಿ ಅಂದರು. ನಾವು ಏನೂ ಸಮಸ್ಯೆ ಇಲ್ಲ ಅಲ್ವಾ ಡಾಕ್ಟರ್ ರೆ ಅಂದ್ವಿ. ಅದಕ್ಕೆ ಅವರು ಇಲ್ಲಾ ಅಂದರು. ಹೊಟ್ಟೆಯ ಸಮೀಪದ ನೋವನ್ನು ಮತ್ತು ಬೆವರು ತ್ತಿರುವುದನ್ನು neglet ಮಾಡುವುದು ಬೇಡ ಅಂದರು. ಕೂಡ್ಲೆ ಹೋಗಿ ಅಂದರು..ನಾವು ಕೂಡಲೇ ಅಲ್ಲಿಂದ ಹೊರಟೆವು... ಅಲ್ಲಿಂದ ಹೊರಟು ಅವರ ಗೇಟ್ ನ ಬಳಿ ಬಂದಾಗ ತಮ್ಮನ ಒಂದು ಬ್ಯಾಗ್ ಡಾಕ್ಟ್ರ ಕ್ಲಿನಿಕ್ ಒಳಗೆ ಉಳಿದಿತ್ತು.. ತಮ್ಮ ಪುನಃ ಅದನ್ನು ತರಲು ಡಾಕ್ಟರ್ ಗೆ ಫೋನ್ ಮಾಡಿ ಒಳ ಹೋದ.. ಅವಾಗಲೂ ಡಾಕ್ಟ್ರ ಬಳಿ ತಮ್ಮ ಕೇಳಿದನಂತೆ normal pain ಅಥವಾ ಬೇರೇನೂ ಸಮಸ್ಯೆ ಇರಬಹುದಾ ಅಂತ.. ಡಾಕ್ಟರ್ ಮೊದಲು ಹೇಳಿದ್ದನ್ನೇ ಮತ್ತೆ ಹೇಳಿದರಂತೆ.. ಉಪ್ಪಿನಂಗಡಿಯಿಂದ 8.45ರ ಸುಮಾರಿಗೆ ಹೊರಟೆವು ನೆಕ್ಕಿಲಾಡಿ ಗೆ ತಲುಪುವಾಗ ತಂದೆ ಕಾರ್ ಗೆ ಪೆಟ್ರೋಲ್ ಹಾಕಿಸಿದ್ದಿಯ ಅಂದ್ರು.. ನಾನು ಕಾರ್ ನಲ್ಲಿ ಇದೆ ಅಂದೆ.. ಆದ್ರೂ ತಂದು ಹೇಳಿದ್ದಕ್ಕೆ MRPL ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿದೆ.. ಈವಾಗಲೂ ತಂದೆಗೆ ಯಾವುದೇ ನೋವು ಇರಲಿಲ್ಲ... ತಮ್ಮ ತಂದೆಯ ಬಳಿ ಕೇಳಿದ ನೋವು ಹೇಗಿದೆ ಅಂದ ವಿಪರೀತ ಇಲ್ಲ.. ಸಹಿಸಲು ಸಾಧ್ಯ ಇರುವ ನೋವಿದೆ ಅಂದರು... ಎಲ್ಲಿ ನೋವು ಅಂದ ತಮ್ಮ.. ಹೊಟ್ಟೆಯ ಬಳಿ ಎಳೆದಂತೆ ಆಗುತ್ತಿದೆ ಅಂದರು.. ಇದನ್ನು ಪದೇ ಪದೇ ನಾವು ಮನೆಯಿಂದ ಹೊರಡು ವಾಗಲೆ ಕೇಳುತ್ತಿದ್ದೆವು.. ತ0ದೆ ಅದೇ ಉತ್ತರ ಕೊಡುತ್ತಿದ್ದರು.. ಉಪ್ಪಿನಂಗಡಿಯಿಂದ ಪುತ್ತೂರು ವರೆಗೆ ತಂದೆಗೆ ವಿಪರೀತವಾದ ಯಾವುದೇ ನೋವು ಇರಲಿಲ್ಲ.. ನಮ್ಮಲ್ಲಿ ಕುಶಾಲು ಮಾತಾಡುತ್ತಿದ್ದರು... ಆದರ್ಶ ಆಸ್ಪತ್ರೆಗೆ 9.30 ಸುಮಾರಿಗೆ ತಲುಪಿದೆವು. ಆದರ್ಶದ ಎಂಟ್ರೆನ್ಸ್ ನಲ್ಲಿ ಕಾರ್ ನಿಲ್ಲಿಸಿದೆ.. ಅಲ್ಲಿಂದ ತಂದೆ ಆರಾಮದಲ್ಲಿ ನಡೆದು ಕೊಂಡು ಒಳ ಹೋದರು. ಆಲ್ಲಿ ಆಗಾಗಲೇ ಇಸಿಜಿ ಗೆ ವ್ಯವಸ್ಥೆ ಆಗಿತ್ತು. ಅದನ್ನು ಮಾಡಿದ್ರು.. ಅದ್ರಲ್ಲಿ ಸಣ್ಣ variation ಇತ್ತು ಮತ್ತು BP 210 ಇತ್ತು... ಶ್ಯಾಮ ಡಾಕ್ಟರ್ ಮಗ ರೌಂಡ್ಸ್ ಗೆ ಹೋಗಿದ್ದರು. ಅವ್ರ ಅಸಿಸ್ಟೆಂಟ್ ತಂದೆಗೆ ಇರುವ ಸಮಸ್ಯೆ ಬಗ್ಗೆ ಡೀಟೇಲ್ಸ್ ಕಲೆಕ್ಟ್ ಮಾಡಿ.. ಅವರ ಸಮಸ್ಯೆ ಬಗ್ಗೆ ನಮ್ಮಲ್ಲಿ ಕೇಳಿದರು.. ಮತ್ತೆ ಆಗಬೇಕಾದ ಪರೀಕ್ಷೆ ಗಳನ್ನು ಹೇಳಿದರು... ಕೂಡಲೇ ಪರೀಕ್ಷೆ ಗಳು ಆದವು.. ತಂದೆಯ ನಾಲಗೆ ಕೆಳಗಡಗೆ ಇಡಲು ಒಂದು ಮಾತ್ರೆ ಕೊಟ್ಟರು. ಅದನ್ನು ತಂದೆ ಅವರು ಹೇಳಿದಂತೆ ಇಟ್ಟರು.. ಕೆಲವು ಮಾತ್ರೆ ತಿನ್ನಲು ಕೊಟ್ಟರು. ಅದನ್ನು ತಿಂದರು. ಬ್ಲಡ್ ಟೆಸ್ಟ್ ಗೆ ಬ್ಲಡ್ ತೆಗೆದು ಕೊಂಡರು. ಆದ್ರ ರಿಪೋರ್ಟ್ ಬರಲೂ 2 ಗಂಟೆ ಬೇಕು ಅಂದರು ಆಯಿತು ಅಂದೆವು.. ಆದಿಕಾಗಿ ಕಾಯುತ್ತಾ ಕುಳಿತೆವು.. ತಂದೆ wash room ಗೆ ಹೋಗಬೇಕು ಅಂದರು. ತಮ್ಮ ಮತ್ತು ನಾನು ಜೊತೆ ಹೋದೆವು.. wash room ನಿಂದಾ ಹೊರ ಬಂದರು... ಮೊದಲು ಇದ್ದ ರೂಂ ಗೆ ಹೋಗಿ ಬೆಡ್ ನಲ್ಲಿ ಕುಳಿತರು ನೋವು ಜಾಸ್ತಿ ಆಗುತ್ತಿದೆ ಅಂದರು.. ನಾನು ಅಲ್ಲೇ ಇದ್ದ ನರ್ಸ್ ಬಳಿ ನೋವು ಜಾಸ್ತಿ ಆಗುತ್ತಿದೆ ಅವರಿಗೆ ಅಂದೆ.. ಅವರು ಮೊದಲು ಡಾಕ್ಟರ್ ಹೇಳಿದ ಇಂಜೆಕ್ಷನ್ ಗಳನ್ನು ಕೊಟ್ಟರು... ಇದಾಗಿ 10 ನಿಮಿಷ ಆಗಲಿಲ್ಲ.. ಮಲಗಿದ್ದ ಬೆಡ್ ನಿಂದಾ ತಂದೆಯ ಒಂದು ಕಾಲು ಕೆಳಗೆ ಬಿತ್ತು.. ಕಾಲನ್ನು ಬೆಡ್ ನ ಮೇಲಕ್ಕೆ ಎತ್ತಿ ಇಟ್ಟೆ. ನಾನು ಅಲ್ಲೇ ತಂದೆ ಯ ಹತ್ತಿರ ಬೆಡ್ ನಲ್ಲಿ ಕುಳಿತಿದ್ದೆ. ತಂದೆಯ ತಲೆ ಬಲಬದಿಗೆ ಬಾಗಿತು.. ತಂದೆಯ ಉಸಿರಾಟ ಹೆಚ್ಚು ಆಯಿತು... ಕೂಡಲೇ ಆಲ್ಲಿ ಕೂಗಿ ಹೇಳಿದೆ. ತಂದೆಗೆ ಏನೋ ಆಗುತ್ತಿದೆ ಎಂದು. ಅಲ್ಲಿದ್ದವರು ಓಡೋಡಿ ಬಂದರು ( ಶ್ಯಾಮ ಡಾಕ್ಟರ್ ಮಗ ಬಂದರು. ನಾನು ಮತ್ತು ತಮ್ಮ ಅವರಲ್ಲಿ ಶ್ಯಾಮ ಡಾಕ್ಟರ್ ರನ್ನು ಬರ ಹೇಳಿ ಅಂದೆ.ಅವರೂ ಬಂದರು) ಕೃತಕ ಉಸಿರಾಟ, ಗ್ಲೂಕೋಸ್, ಇಂತಹ ಕೆಲವು ವ್ಯವಸ್ಥೆ ಮಾಡಿದರು.. ತಂದೆಯ ಪಲ್ಸ್ ನಾರ್ಮಲ್ ಗೆ ಬರಲಿಲ್ಲ.. ತಂದೆಯ ಮೆದುಳು ನಿಷ್ಕ್ರಿಯ ಗೊಂಡಿತು... ಕಾರ್ಡಿಯಾಕ್ ಅರೆಸ್ಟ್ ಆಯಿತು... 11.30ರ ಸುಮಾರಿಗೆ ತಂದೆಯ ಮರಣ ವನ್ನೂ ಡಾಕ್ಟರ್ ಅಧಿಕೃತವಾಗೀ ಘೋಷಿಸಿದರು...66 ವರ್ಷದಲ್ಲಿ ತಂದೆ ಆಸ್ಪತ್ರೆಗೆ ಹೋದವರಲ್ಲ, ಬೆಡ್ ನಲ್ಲಿ ಮಲಗಿದವರಲ್ಲ, ಶೀತ ಜ್ವರ ತಂದೆಗೆ ಬಂದಿದ್ದು ನಾ ನೋಡಲಿಲ್ಲ... ಡಯಾಬಿಟೀಸ್ ನ ಮಾತ್ರೆಗಳನ್ನು ತಂದೆ ತಿನ್ನುತ್ತಿದ್ದರು.. ಅದೂ ನಾರ್ಮಲ್ ಆಗಿತ್ತು... ಆರೋಗ್ಯವಂತ, ಪ್ರಾಮಾಣಿಕ, ಸಭ್ಯ, ಮಗುವಿನ ಸ್ವಭಾವದ, ಸಹೃದಯಿ ವ್ಯಕ್ತಿ.. ನಮ್ಮಲ್ಲಿಂದ ದೂರವಾದರು... ಇದಕ್ಕೆ ಕಾರಣ ಇಷ್ಟೇ ನಮಗೆ ಹಾರ್ಟ್ ಗೆ ಸಂಬಂದಿಸಿದ ಆಸ್ಪತ್ರೆಯ ಕೊರತೆ... ಇಂತಹ ಸಮಸ್ಯೆ ಗೆ ಕೂಡಲೇ ಅಂಜಿಯೋಗ್ರಾಂ, ಆಂಜಿಯೋಪ್ಲಾಸ್ಟ್, ಹಾರ್ಟ್ ಆಪರೇಷನ್ ಮಾಡುವ ಸೌಲಭ್ಯ ಇರುವ ಆಸ್ಪತ್ರೆ ಇರಬೇಕು... ಅದ್ರ ಬಗ್ಗೆ ತಿಳಿದ ಡಾಕ್ಟರ್ ಕೂಡ ನಾವು ಹೋದ ಆಸ್ಪತ್ರೆಯಲ್ಲಿ ಲಭ್ಯ ಇರಬೇಕು... ಇಲ್ಲದಿದ್ದರೆ ಅಮೂಲ್ಯ ಜೀವಗಳು ಕಣ್ಮರೆ ಆಗುತ್ತವೆ...
ರಿಪೋರ್ಟ್ ಗಳು:-
Comments