ಅಪ್ಪನ ಕಾಯಕ ನಾ ಕಂಡಂತೆ.....




ಸೀತಾರಾಮ ಭಟ್ 
ಸುಮಾರು 40 ವರ್ಷದ ಹಿಂದೆ ತಂದೆ ದೈನಿಕ ಠೇವಣಿ ಸಂಗ್ರಾಹಕ (pigmy collector) ಕೆಲಸಕ್ಕೆ ಸೇರಿದರು... ಬೆಳಿಗ್ಗೆ 9.45 ಕ್ಕೆ ಮನೆಯಿಂದ ಹೊರಟರೆ 10.30 ಕ್ಕೆ ಬ್ಯಾಂಕ್ ಗೆ ತಲುಪಿ.10.30 ರಿಂದ 12.30ರ ವರೆಗೆ ಆಫೀಸ್ ನಲ್ಲಿ ಕೆಲಸ.. 12.30ರಿಂದ5 ಗಂಟೆ ವರೆಗೆ ಪಿಗ್ಮಿ ಕಲೆಕ್ಷನ್ ಮಾಡುತ್ತಿದ್ದರು. ಈ ಸಮಯದಲ್ಲಿ ಹಲವಾರು ಒಳ್ಳೆಯ ಗೆಳೆಯರನ್ನು ಪಡೆದಿದ್ದರು ಅಪ್ಪ. ತನ್ನ ಜೀವಿತದ ಕೊನೆಯವರೆಗೂ ಅಂದರೆ ಜನವರಿ 17ರ ವರೆಗೂ ಪ್ರಾಮಾಣಿಕವಾಗಿ ದುಡಿದವರು.... ನಾವು 2005 ಕ್ಕಿಂತ ಮೊದಲು ವಜ್ರಾಂಗಿ ಎಂಬಲ್ಲಿ ಇದ್ದೆವು.. ಅಲ್ಲಿನ ಮನೆ, ದನದ ಕೊಟ್ಟಿಗೆ ಎಲ್ಲಾ ತಂದೆಯ ಬೆವರು ಹನಿ ಸುರಿಸಿ ಗಳಿಸಿದ ದುಡ್ಡಿನಿಂದಲೆ ಆಗಿದ್ದು.... 2003 ರಲ್ಲಿ ಯೇ ನಮ್ಮ ಮನೆಯಲ್ಲಿ tv, ಗ್ಯಾಸ್, ಫೋನ್ ಇತ್ತು . ಆ ಸಮಯದಲ್ಲಿ ಅದು ಅಪರೂಪ. ವಜ್ರಾಂಗಿ ಯ ಜಾಗ ಸಣ್ಣದಾಯಿತು, ಎಂಬ ಕಾರಣಕ್ಕೆ ಆ ಜಾಗವನ್ನು ಕೊಟ್ಟು, 2005ರಲ್ಲಿ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಸಮೀಪದ ದೇರ್ಜಾಲು” ಎಂಬಲ್ಲಿ 6 ಎಕ್ರೆ ಜಾಗ ಖರೀದಿಸಿದೆವು... ಜಾಗ ಖರೀದಿ ಮಾಡಿದ ಸಮಯ ತಂದೆಯ ಸಂಬಳ ನಮಗೆ ಆಧಾರ ಆಗಿತ್ತು. ಆ ಕಾಲಕ್ಕೆ ತಂದೆಗೆ ಒಳ್ಳೆಯ ಸಂಬಳ ಸಿಗುತಿತ್ತು. ಜಾಗ ಖರೀದಿಸಲು ಮುಂಡ್ರ ಕಜೆ ಅಜ್ಜ ನವರ ಸಹಾಯ ಕೂಡ ಇದೆ... ತಂದೆ ದುಡಿಮೆ ಆವಾಗ ನಮಗೆ ಆನೆ ಬಲ ತಂದುಕೊಟ್ಟಿತ್ತು.. ಹಂತ ಹಂತವಾಗಿ ಜಾಗ ವನ್ನು ಅಭಿವೃದ್ಧಿ ಪಡಿಸಿದೆವು... ಮಧ್ಯಮ ವರ್ಗದ ಸುಖೀ ಕುಟುಂಬ ನಮ್ಮದು... ಮಧ್ಯಮ ವರ್ಗದವರ 3 ಹೊತ್ತು ಶುಚಿ ರುಚಿ ಯಾದ ಊಟಕ್ಕೆ ಕೊರತೆ ಇರಲಿಲ್ಲ... ತಂದೆಗೆ ದುಡಿಮೆಯೇ ದೇವರು, ಕಾಯಕವೇ ಕೈಲಾಸ ಅನ್ನುವ ತತ್ವವನ್ನು ಪಾಲಿಸುತ್ತಿದ್ದವರು.. ಸರಕಾರೀ ರಜೆಯ ದಿನ ಮಾತ್ರ ಮನೆಯಲ್ಲಿ ಇರುತ್ತಿದ್ದರು. ಅದೂ ಅರ್ಧ ದಿವಸ... ಉಳಿದ ಅರ್ಧ ದಿನ ಪಿಗ್ಮಿ ಕಲೆಕ್ಷನ್ ಮಾಡುತ್ತಿದ್ದರು.... ತಂದೆ ಮಧ್ಯಾಹ್ನ ದ ಊಟಾ ಹೋಟೆಲ್ ನಲ್ಲಿ ಅದೂ ಗಾಂಧೀ ಪಾರ್ಕ್ ನ ಕೊ0ಕಣಿ ಒಬ್ಬರ ಹೋಟೆಲ್ ನ ಊಟಾ ತಂದೆಗೆ ಬಾರೀ ಇಷ್ಟ. ಸಂಜೆ ಕಾಫಿ ಮತ್ತು ಚಪಾತಿ ಅನ್ನಪೂರ್ಣ ಹೋಟೆಲ್ ನಲ್ಲಿ .... ಹೊಸದಿಗಂತ ಪತ್ರಿಕೆ ನಮ್ಮ ಮನೆಗೆ 30 ವರ್ಷದಿಂದ ತರುತ್ತಿದ್ದವರು ತಂದೆ... ಆ ದಿನದ ಸುದ್ದಿ ತಂದೆಗೆ ತಿಳಿಯಬೇಕು ಅನ್ನುವ ಆಸಕ್ತಿ ಇತ್ತೂ. ಯಾರೂ ತಂದೆಯ ಬಗ್ಗೆ ಕೈ ತೋರಿಸಿ ಮಾತನಾಡಿದವರಲ್ಲ.. ಅಷ್ಟು ಪ್ರಾಮಾಣಿಕರು ನನ್ನ ತಂದೆ... ತಂದೆಯ ಕೊನೆ ದಿನ ಅವರನ್ನು ನೋಡಿ ಆತ್ತವರೇಷ್ಟು... ಯಾರೋ ನಮಗೆ ಪರಿಚಯ ಇಲ್ಲದವರು ತಂದೆಗೆ ಪರಿಚಿತರು, ಆತ್ಮೀಯರು ಬಂದು ಕಣ್ಣೀರು ಸುರಿಸಿ, ಅವರ ಬಗ್ಗೆ ಅವರ ಪ್ರಾಮಾಣಿಕತೆ ಬಗ್ಗೆ ಹೇಳುವಾಗ ಅಳು ಉಕ್ಕಿ ಬಂತು.....3 ವರ್ಷದಿಂದ ನಾವು ಹೇಳುತ್ತಿದ್ದೆವು ಸಾಕಪ್ಪಾ ಈ ಕೆಲಸ ಬಿಟ್ಟು ಬಿಡಿ ಇನ್ನು ಎಂದು. ಆದ್ರೆ ತಂದೆಯ ಮಾತು ಒಂದೇ ನಾನು ಜೀವ ಇರುವ ವರೆಗೂ ಕೆಲಸಕ್ಕೆ ಹೋಗಬೇಕು... ಹಾಗೆಯೇ ಮಾಡಿದರು..... ಜನವರಿ 17ಕ್ಕೆ ದುಡಿದು  ಬಂದು ಆ ದಿನದ ಕೆಲಸ ಮುಗಿಸಿ ರಾತ್ರಿ ಇಹಲೋಕ ತ್ಯಜಿಸಿದರು...


Comments

Popular posts from this blog

ತೆಂಗಿನ ಮರದ ಶತ್ರು ಹಂತಕ ಕೆಂಪುಮೂತಿ ದುಂಬಿಯ(RPW) ಬಗೆಗಿನ ಮಾಹಿತಿ ಇಲ್ಲಿದೆ

ಅಪ್ಪನ ಶಾಂತ ಸ್ವಭಾವ ದ ಬಗ್ಗೆ ಒಂದು ಬರಹ!