ಅಪ್ಪನ ಶಾಂತ ಸ್ವಭಾವ ದ ಬಗ್ಗೆ ಒಂದು ಬರಹ!


ಅಪ್ಪ ಮತ್ತು ಅಮ್ಮ 


ಅಪ್ಪನಿಗೆ ಕೋಪ ಬರುತ್ತಿದ್ದುದು ಕಡಿಮೆ..... ನಾವು ವಜ್ರಾಂಗಿಯಲ್ಲಿ ಇರುವಾಗ ತಂದೆಗೆ ಸಿಟ್ಟು, ಕೋಪ ಬರುತ್ತಿತ್ತು. ಆದ್ರೆ ಅದು ಕ್ಷಣಿಕ... ನಾವು ದೇರ್ಜಾಲಿನಲ್ಲಿ ಜಾಗ ಮಾಡಿದ ನಂತ್ರ ಅಪ್ಪನಿಗೆ ಕೋಪ ಬಂದದ್ದೆ, ಅಪರೂಪ, ನಮ್ಮ ಮನೆ ಸುತ್ತ ಮುತ್ತ ತಂದೆಗೆ ಎಲ್ಲರೂ ಸ್ನೇಹಿತರೆ... ತಂದೆ ಯಾರಲ್ಲೂ ಜಗಳ ಮಾಡಿದವರಲ್ಲ, ಯಾರಾದರೂ ತಂದೆಗೆ ಹಿಡಿಸದ ಮಾತುಗಳು ಹೇಳಿದರೆ, ಅವರ ಜೊತೆ ಮಾತನ್ನೇ ಬಿಡುತ್ತಿದ್ದರು... ತಂದೆ ಅವ್ರ ಜೊತೆ ಮಾತು ಆಡುತ್ತಿರಲಿಲ್ಲ.. ಅವರ ವಿಷ್ಯ ಕೇಳುತ್ತಿರಲಿಲ್ಲ... ತಾನಾಯಿತು ತನ್ನ ಕೆಲಸ ಆಯಿತು ಅಂತ ಇದ್ದವರು ತಂದೆ.ಶಾಂತ ಸ್ವಭಾವದವರು ಅವರು ... ಕೆಟ್ಟ ಬೈಗುಳಗಳು ಅವರ ಬಾಯಿಂದ ಬರುತ್ತಿರಲಿಲ್ಲ.ಕೆಲವು ವರ್ಷಗಳ ಹಿಂದೆ ತಂದೆಯನ್ನು ಒಬ್ಬ ವ್ಯಕ್ತಿ  ಏಕವಚನದಲ್ಲಿ ಕರೆದಿದ್ದ. ತಂದೆಯಲ್ಲಿ ಇದರ ಬಗ್ಗೆ ಹೇಳಿದೆ. ಅದಕ್ಕೆ ಅವರು ಹೇಳಿದ್ದು,"ದೇವರೇ ಅವನಿಗೆ ಬುದ್ದಿ ಕೊಡಲಿ, ನೀನು ಸುಮ್ಮನಿರು" .. ನೀನು ಆತನಲ್ಲಿ ಮಾತನಾಡಬೇಡ ಅಂದಿದ್ದರು . ಇಂದಿನವರೆಗೂ ನಾನು ಆ ವ್ಯಕ್ತಿಯಲ್ಲಿ ಮಾತನಾಡುತ್ತಿಲ್ಲ . ಒಂದು ದಿನ ನಮ್ಮ  ಜಾಗದಿಂದ  ಆ ವ್ಯಕ್ತಿ ಸೊಪ್ಪು ಕಡಿದಿದ್ದ , ಇದಕ್ಕೆ ನಾನು ವಿರೋಧಿಸಿದ್ದೆ, ಆ ದಿನ ರಾತ್ರಿ ಆ ವ್ಯಕ್ತಿ ಆಯುಧ (ಇಂತಹ ಹಲವು ಆಯುಧ ನನ್ನಲ್ಲಿ ಇದೆ ಅಂದಿದ್ದೆ) ಹಿಡಿದು ಆತನ ಪರಿವಾರದ ಜೊತೆ ಬಂದಿದ್ದ. ತಂದೆ ಆತನಲ್ಲಿ ಈ ಸಮಯದಲ್ಲಿ ಈ ರೀತಿ ಮನೆಗೆ  ಬರುವುದು ಕಾನೂನಿನ ಪ್ರಕಾರ ತಪ್ಪು, ನಿನಗೆ ಮುಂದೆ ಸಮಸ್ಯೆ ಅಂದಿದ್ದರು, ಆತನಿಗೆ ಬುದ್ದಿ ಮಾತನ್ನು ಹೇಳಿದ್ದರು, ಆತನಿಗೆ ಆ ಬುದ್ದಿ ಮಾತು ಎಷ್ಟು ತಲೆಗೆ ಹೋಗಿದ ಗೊತ್ತಿಲ್ಲ... ನಂತರ ಆತ ತಂದೆಯ ಕಾಲಿಗೆ ನಮಸ್ಕರಿಸಿ ಹೋಗಿದ್ದ.... ನಾನು ಪೊಲೀಸ್ ಗೆ ದೂರು ಕೊಡುವ ಬಗ್ಗೆ ತಂದೆಯಲ್ಲಿ ಹೇಳಿದಾಗ ತಂದೆ ನನ್ನನ್ನು ತಡೆದಿದ್ದರು..... ಆತನಿಗೆ ಬುದ್ದಿ ಇಲ್ಲ, ನಿನಗೆ ಬುದ್ದಿ ಇಲ್ಲವೇ... ಸುಮ್ಮನಿರು.. ಇನ್ನೊಮ್ಮೆ ಹೀಗೆ ಆದಲ್ಲಿ ಮುಂದಿನ ದಾರಿ ನೋಡುವ ಅಂದಿದ್ದರು.... ಅಪ್ಪನಂತೆ ಶಾಂತ ಸ್ವಭಾವದಲ್ಲಿ ಜೀವಿಸುವ ಪ್ರಯತ್ನದಲ್ಲಿ ಇದ್ದೇನೆ....



#prakashderjalphotography


ಪ್ರಕಾಶ ದೇರ್ಜಾಲು

Comments

Popular posts from this blog

ತೆಂಗಿನ ಮರದ ಶತ್ರು ಹಂತಕ ಕೆಂಪುಮೂತಿ ದುಂಬಿಯ(RPW) ಬಗೆಗಿನ ಮಾಹಿತಿ ಇಲ್ಲಿದೆ