ಅಪ್ಪನ ಕೆಲಸದಲ್ಲಿ ನಮ್ಮ ಜವಾಬ್ದಾರಿ ಏನು?


ಬೆಳಿಗ್ಗೆ 6.30ಕ್ಕೆ ಏಳುತ್ತಿದ್ದ ತಂದೆ ನಿತ್ಯಕರ್ಮಗಳನ್ನು ಮುಗಿಸಿ ಮೊದಲು ಒಂದು ಲೋಟ ಬಿಸಿ ನೀರು ತಪ್ಪದೆ ಕುಡಿಯುತ್ತಿದ್ದರು. ನಂತರ ಮನೆ ಸುತ್ತ ಸಿಮೆಂಟ್ ಹಾಕಿದ ಜಾಗವನ್ನು ನಿತ್ಯ ಗುಡಿಸಿ ನೀಟಾಗಿ ಇಡುತ್ತಿದ್ದರು. ನಂತರ ದೇವರಿಗೆ ಹೂ ಕೊಯ್ಯುವ ಕೆಲಸ. ಇದೆಲ್ಲ ಆಗಿ ತಂದೆ ಬುಧವಾರ ಮತ್ತು ಆದಿತ್ಯ ವಾರ ಶೇವಿಂಗ್ ಮಾಡುತ್ತಿದ್ದರು... ವಾರದಲ್ಲಿ 2 ದಿವಸ ಶೇವಿಂಗ್... ಸೋಮವಾರ ಮತ್ತು ಶುಕ್ರವಾರ ರಾತ್ರಿ 2 ದಿವಸ ತನ್ನೆಲ್ಲ ಬಟ್ಟೆಗಳಿಗೆ ಐರನ್ ಮಾಡುತ್ತಿದ್ದರು. ತಂದೆ ಯಾವಾಗಲೂ ನೀಟ್ & ಕ್ಲೀನ್. ಐರನ್ ಮಾಡಿದ ಬಟ್ಟೆಯೇ ಹಾಕುವುದು. ನೋಡಲು ಒಂದೇ ರೀತಿಯ ಬಣ್ಣದ ಬಟ್ಟೆ ಹಾಕಿದ್ರು.30 ಜೊತೆಗಿ0ತ ಹೆಚ್ಚು ಬಟ್ಟೆ ತಂದೆಯ ಬಳಿ ಇತ್ತು. ತಂದೆ raymonds,siyarams ಬ್ರಾಂಡ್ ನ ಬಟ್ಟೆಯನ್ನೇ ಸ್ಟಿಚ್ ಮಾಡಿಸುತ್ತಿದ್ದರು, ಬೆಳಗಿನ ಕೆಲಸ ಆಗುವಾಗ 8.30 ಆಗುತಿತ್ತು. ನಂತರ ಅರ್ದ ಗಂಟೆ ಸ್ನಾನ. ಅದ್ರಲ್ಲೂ ತಂದೆಯ ಇಷ್ಟದ ಸೋಪ್ pears. ಸ್ನಾನ ಮುಗಿಸಿ ಮಡಿ ಉಟ್ಟು ದೇವರ ಫೋಟೋ ಕ್ಲೀನ್ ಮಾಡಿ. ದೇವರ ಕೋಣೆ ಯಲ್ಲಿ ಫೋಟೋ ಗೆ ಹೂವನ್ನು ಇಟ್ಟು. ಜಪ ಮಾಡಿ . ಕಾರ್ ಮತ್ತು ಸ್ಕೂಟರ್ ಗೆ ಹೂ ಇಟ್ಟು , ಕೈ ಮುಗಿದು ನಂತರ ದೇವರ ಕೋಣೆಯಲ್ಲಿ ದೇವರ ಪ್ರಾರ್ಥನೆ, ನಂತರ ಹೊರಗಡೆ ಬಂದು ಜಾಗದ ದೈವಗಳಿಗೆ ಕೈ ಮುಗಿದು ಬರುತ್ತಿದ್ದರು. ನಂತರ ತಾಯಿ ದಿನಾಲೂ ಬೆಳಿಗ್ಗೆ ಊಟಾ ಮತ್ತು ಗೋಧಿ ದೋಸೆ/ನೀರುದೋಸೆ/ಸಜ್ಜಿಗೆ/ಉಂಡೆ ಇತ್ಯಾದಿ ಮಾಡಿಟ್ಟಿರುತ್ತಿದ್ದರು ... ಸಕ್ಕರೆ ಇಲ್ಲದ ಕಾಫೀ ಕುಡಿಯುತ್ತಿದ್ದ ತಂದೆ, ಯಾವುದೇ ಗಡಿ ಬಿಡಿ ಇಲ್ಲದೆ ನಿಧಾನವಾಗಿ ಸ್ವಲ್ಪ ಊಟಾ,2 ದೋಸೆ ತಿನ್ನುತ್ತಿದ್ದರು. ಎಷ್ಟು ಲೇಟ್ ಆದ್ರೂ ತರಾತುರಿಯಲ್ಲಿ ತಂದೆ ತಿಂಡಿ ತಿನ್ನುತ್ತಿರಲಿಲ್ಲ, ಊಟಾ ಮಾಡುತ್ತಿರಲಿಲ್ಲ,9.15 ಆಗುವಾಗ ತಂದೆಯ ತಿಂಡಿ ತಿಂದಾಗುತಿತ್ತು.. ನಂತರ ಪುನಃ ವಾಶ್ ರೂಂ ಗೆ ಹೋಗಿ ಬಂದು. ಐರನ್ ಮಾಡಿಟ್ಟ ಪ್ಯಾಂಟ್ ಶರ್ಟ್ ಹಾಕಿ, ಸಕ್ಕರೆ ಕಾಯಿಲೆಗೆ tablet ತಿನ್ನುತ್ತಿದ್ದರು. ನ0ತ್ರ ದೇವರಿಗೆ ಕೈ ಮುಗಿದು, ಕುಂಕುಮ ತಿಲಕ ಹಾಕಿ, ಮುನ್ನಾ ದಿನ ನೀಟಾಗಿ ತೊಳೆದಿಟ್ಟ ಚಪ್ಪಲಿ ಧರಿಸಿ, ನನ್ನ ಜೊತೆ ಸ್ಕೂಟರ್ ನಲ್ಲಿ ಬರುತ್ತಿದ್ದರು ನನ್ನ ಕೆಲಸ ತಂದೆಯನ್ನು ಬೆಳಿಗ್ಗೆ 9.30-9.45 ರ ಸುಮಾರಿಗೆ ಸ್ಕೂಟರ್/ಕಾರ್ ನಲ್ಲಿ ಪರಪ್ಪಿಗೆ ಬಿಟ್ಟು ಬರುವುದು. ಸಂಜೆ 5.30-5.45 ಕ್ಕೆ ಪರಪ್ಪಿನಿಂದ ಮನೆಗೆ ಕರೆದು ಕೊಂಡು ಬರುವುದು..15 ವರ್ಷ ನಾನು ಈ ಕೆಲಸ ಮಾಡಿದ್ದೇನೆ.. ದೇವರ ದಯೆ, ತಂದೆಯ ಆಶೀರ್ವಾದ ವೋ ಏನೋ ತಂದೆಯನ್ನು ಒಮ್ಮೆಯೂ ಸ್ಕೂಟರ್/ಬೈಕ್ ನಿಂದಾ ಬೀಳಿಸಿದ ಉದಾಹರಣೆ ಇಲ್ಲ..ಸಂಜೆ 5.45 ರ ಮಾನಸ ಬಸ್ ನಲ್ಲಿ ತಂದೆ ಬರುತ್ತಿದ್ದರು.. ಕೆಲವು ಸಮಯ ಮೊದಲು 5.30 ರ ಸಾಯಿ bus ನಲ್ಲಿ ಬರುತ್ತಿದ್ದರು.. ನಾನು ಮತ್ತು ಮಗ 5 .15 ಗಂಟೆಗೆ ಪರಪ್ಪಿಗೆ ಹೋಗಿ ತಂದೆಯ ಬರುವಿಕೆಗೆ ಕಾಯುತ್ತಾ ಕುಳಿತಿರುತ್ತಿದ್ದೆವು... ಈಗ ಅದೆಲ್ಲ ನೆನಪು....2019-20 ಕೊರೋನ ಸಮಯದಲ್ಲಿ ತಮ್ಮ ಮನೆಯಲ್ಲಿ ಇದ್ದ ಕಾರಣ ಪಾಸ್ ಮಾಡಿಸಿ ತಂದೆಯನ್ನು ಉಪ್ಪಿನಂಗಡಿ ವರೆಗೆ ಬಿಟ್ಟು ಅಲ್ಲಿಯೇ ನಿತ್ತು ವಾಪಸ್ ಕರೆದು ಕೊಂಡು ಬರುತ್ತಿದ್ದ. ಕಾರಣ ಬಸ್ ಇರಲಿಲ್ಲ. ಆ ಸಮಯದಲ್ಲಿ 2 ತಿಂಗಳು corona lockdown ಸಮಯದಲ್ಲಿ ತಂದೆ ಮನೆಯಲ್ಲಿ ಇದ್ದರು. ಅವರಿಗೆ ಮನೆಯಲ್ಲಿ ಸಮಯ ಕಳೆಯಲು ಕಷ್ಟ ಆಗುತಿತ್ತು.. ಆ ವರ್ಷ ತೋಟದ ಅಡಿಕೆ ಹೆಕ್ಕುವುದು, ಸೋಗೆ ಎಳೆಯುವ ಕೆಲಸ ಮಾಡಿ ಸಮಯ ಕಳೆಯುತ್ತಿದ್ದರು... ತಂದೆಯ ಕೊನೆಯ ದಿನದ ವರೆಗೆ ತಂದೆಯನ್ನು ಮನೆಯಿಂದ ಪರಪ್ಪಿಗೆ ಪರಪ್ಪಿನಿಂದ ಮನೆಗೆ ತಂದು ಬಿಟ್ಟು ನೆಮ್ಮದಿ ನನಗಿದೆ.. ಒಂದೆರಡು ಸಲ ಲೇಟ್ ಆಗಿದ್ದಾಗ ಬೊಬ್ಬೆ ಹಾಕಿ, ನನಗೆ ತುರ್ತು ಕೆಲಸ ಇರುವ ಸಂದರ್ಭದಲ್ಲಿ ತಂದೆಯನ್ನು ಬಿಟ್ಟು ಹೋದ ಉದಾಹರಣೆ ಇದೆ... ಅದು ಬೆರಳಣಿಕೆಷ್ಟು ದಿನ 15 ವರ್ಷದಲ್ಲಿ ಹೆಚ್ಚು ಎಂದರೆ 4 ದಿವಸ ಇರಬಹುದು.... ತಂದೆ ಗೆ ಕೂಡ ಕೋಪ ಬಂದು ಮತ್ತೆ ನಾನು ಹೀಗೆ ಅಪ್ಪ ಅಂತ ಹೇಳಿದ ನಂತರ ಶಾಂತಾರಾಗುತ್ತಿದ್ದರು. ಮತ್ತೆ ಮರು ದಿವಸ ಪುನಃ ಪರಪ್ಪಿಗೆ ಬಿಟ್ಟು ಬರುತ್ತಿದ್ದೆ.. ಸಂಜೆ ಕರೆದು ಕೊಂಡು ಬರುತ್ತಿದ್ದೆ.. ಅದು ಯಾವುದೇ ಮಳೆ ಇರಲಿ, ಬಿಸಿಲಿರಲೀ ತಂದೆಯನ್ನು ಕರೆದು ಕೊಂಡು ಬರುವುದು ನನ್ನ ಜವಾಬ್ದಾರಿ ಆಗಿತ್ತು..... ಇನ್ನು ತಂದೆಯನ್ನು ಕರೆದು ಕೊಂಡು ಹೋಗುವ ಹಾಗಿಲ್ಲ.... ಇಷ್ಟು ಬೇಗ ಇಂತಹ ದಿನ ಬರಬಹುದು ಅಂತ ಅಂದುಕೊಂಡಿರಲಿಲ್ಲ.......




ಪ್ರಕಾಶ ದೇರ್ಜಾಲು

Comments

Popular posts from this blog

ತೆಂಗಿನ ಮರದ ಶತ್ರು ಹಂತಕ ಕೆಂಪುಮೂತಿ ದುಂಬಿಯ(RPW) ಬಗೆಗಿನ ಮಾಹಿತಿ ಇಲ್ಲಿದೆ

ಅಪ್ಪನ ಶಾಂತ ಸ್ವಭಾವ ದ ಬಗ್ಗೆ ಒಂದು ಬರಹ!