ದೇವರ ಮೇಲೆ ಅಪ್ಪನಿಗಿದ್ದ ಭಕ್ತಿ ಮತ್ತು ಶ್ರದ್ಧೆ!???
![]() |
ಶುಕ್ರವಾರದ ಭಜನೆ ಮಾಡುವ ಸಮಯ |
ದೇವರ ಮೇಲೆ ಮತ್ತು ದೈವಗಳ ಮೇಲೆ ಅಪ್ಪನಿಗೆ ಅಪಾರ ಭಕ್ತಿ ಮತ್ತು ಶ್ರದ್ಧೆ ಇತ್ತು.. ದಿನಕ್ಕೆ 2 ಬಾರೀ ಜಾಗದ ದೈವಗಳಿಗೆ ಮತ್ತು ಮನೆಯ ಆರಾಧ್ಯ ದೇವರಿಗೆ ನಮಸ್ಕಾರ ಮಾಡಿ ಪ್ರಾರ್ಥಿಸುತ್ತಿದ್ದರು. ಬೆಳಿಗ್ಗೆ ನಿತ್ಯಕರ್ಮಗಳನ್ನು ಮುಗಿಸಿ ದೇವರಿಗೆ ಹೂ ಕೊಯ್ದು. ನಂತರ ಸ್ನಾನ ಮಾಡಿ.. ದೇವರಿಗೆ ತಾಮ್ರದ ಕೊಡಪಾನದಲ್ಲಿ ನೀರು ತುಂಬಿಸಿ ತರುತ್ತಿದ್ದರು.ಈ ತಂಬಿಗೆಯಲ್ಲಿ ದೇವರ ಕೋಣೆಗೆ ನೀರು ತೆಗೆದು ಕೊಂಡು ಹೋಗುವ ಮೊದಲು ತುಳಸಿ ಕಟ್ಟೆಗೆ ಮತ್ತು ತುಳಸಿ ಗಿಡಕ್ಕೆ 2 ರಿಂದ 4 ಕೊಡಪಾನ ನಿತ್ಯ ನೀರು ಎರೆಯುತ್ತಿದ್ದರು. ನಂತರ ಕೊಡಪಾನ ದಲ್ಲಿ ನೀರು ದೇವರ ಕೋಣೆಗೆ ಕೊಂಡು ಹೋಗಿ ಅದಿಕೆ ತಾಮ್ರದ ಹರಿವಾಣ ಮುಚ್ಚಿ ಇಡುತ್ತಿದ್ದರು. ದೇವರ ಪೂಜೆಗೆ ಬೇಕಾದ ಸಾಮಾಗ್ರಿಗಳು ಎಲ್ಲವನ್ನೂ ತಂದೆ ತಂದಿದ್ದರು... ದೇವರಿಗೆ ಪೀಠ (ಹಲಸಿನ ಮರದ್ದು) ಆರತಿ ತಟ್ಟೆಗಳು, ಹರಿವಾಣ ಇತ್ಯಾದಿಗಳು. ದೇವರ ಫೋಟೋಗಳನ್ನು ಶುಚಿ ಮಾಡಿದ ಬಳಿಕ ಹೂವನ್ನು ಇಟ್ಟು.. ಊದುಬತ್ತಿ ಹೊತ್ತಿಸಿ. ಆರತಿ ಮಾಡಿ ಜಪ ಮಾಡುತ್ತಿದ್ದರು. ನಂತರ ನಿತ್ಯವೂ ಮನೆಯಲ್ಲಿರುವ ವಾಹನಕ್ಕೆ ಹೂವನ್ನ ಇಟ್ಟು ದೂಪಾರತಿ ಮಾಡುತ್ತಿದ್ದರು. ನಂತರ ದೇವರಕೊಣೆಗೆ ಬಂದು ದೇವರಿಗೆ ನಮಿಸಿ... ಮನೆಯ ಹೊರಗೆ ಬಂದು ದೈವಗಳಿಗೆ ನಮಿಸಿ. ದೇವರ ಕೋಣೆಗೆ ಹಿಂದಿರುಗುತ್ತಿದ್ದರು.. ಇದಕ್ಕೆ ನಿತ್ಯವೂ ಸರಿ ಸುಮಾರು 1 ಗಂಟೆ ಸಮಯ ಮೀಸಲಿಟ್ಟಿದ್ದರು ಅಪ್ಪ. ಬೆಳಗಿನ ನಿತ್ಯ ಪೂಜಾ ವಿಧಿ ವಿಧಾನಗಳನ್ನು ಮುಗಿಸಿ ಮತ್ತೆ ತಲೆಗೆ ನೆಲ್ಲಿ ಕಾಯಿ ಎಣ್ಣೆ ಹಚ್ಚಿ ಕಾಫಿ ಕುಡಿಯುವುದು. ಇನ್ನು ರಾತ್ರಿ ಕೂಡ ಮನೆಯಲ್ಲಿ ದೇವರಿಗೆ ಪೂಜಾ ವಿಧಿಗಳನ್ನು ಅಪ್ಪ ಭಕ್ತಿಯಿಂದ ಮಾಡುತ್ತಿದ್ದರು.. ಜಪ ಮಾಡಿ ಮತ್ತೆ ನೆಲ ಸಾರಿಸಿ ಪೂಜೆ(ನಮ್ಮಲ್ಲಿ ಯಾವುದೇ ದೇವರ ಮೂರ್ತಿ ಇಲ್ಲ) ಮಾಡುತ್ತಿದ್ದರು. ನಂತರ ತುಳಸಿಗೆ ಎಳ್ಳು ಎಣ್ಣೆ ಹಾಕಿದ ಹಣತೆ ಹಚ್ಚಿ ನಮಸ್ಕರಿಸಿ. ನಂತರ ತುಪ್ಪ ಹಾಕಿದ ಹಣತೆ ಯನ್ನು ದನದ ಕೊಟ್ಟಿಗೆ ಯ ಸಮೀಪ ಇಟ್ಟು ದೈವಗಳಿಗೆ ನಮಸ್ಕರಿಸಿ ಬರುತ್ತಿದ್ದರು. ಇದು ದಿನ ನಿತ್ಯದ ಅಪ್ಪನ ಕಾರ್ಯಕ್ರಮ. ಸೂತಕ ವನ್ನು ಹೊರತು ಪಡಿಸಿ, ಒಂದು ದಿನ ಕೂಡ ಪೂಜೆ, ಭಜನೆ ಮಾಡದೆ ಇದ್ದ ದಿವಸ ಇಲ್ಲ .ಪ್ರತೀ ಶುಕ್ರವಾರ ಭಜನೆ ಕೂಡ ನಮ್ಮ ಮನೆಯಲ್ಲಿ ಮಾಡುತ್ತಿದ್ದರು ಅಪ್ಪ. ಇದಕ್ಕೆ 1 ರಿಂದ 1.30 ಗಂಟೆ ಸಮಯ ಮೀಸಲು.. ಇನ್ನು ಪ್ರತೀ ವರ್ಷ ನಮ್ಮ ದೈವಗಳಿಗೆ ವರ್ಷಕ್ಕೆ 2 ಸಲ ಪರ್ವ. ನಾಗನಿಗೆ ನಾಗರ ಪಂಚಮಿ ದಿವಸ ಹಾಲೆರೆಯುತ್ತಿದ್ದೇವು. ಇದು ಅಪ್ಪನೇ ಮಾಡುತ್ತಿದ್ದದ್ದು. ಮತ್ತು ದೈವಗಳಿಗೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಪರ್ವ ಮಾಡುವಾಗ ನಾಗನಿಗೂ ಪರ್ವ, ಅಭಿಷೇಕ ಮಾಡುತ್ತಿದ್ದೆವು... ನಾಗರ ಪಂಚಮಿ ಯ ದಿವಸ ಅಪ್ಪ ನಾಗನಿಗೆ ಅಭಿಷೇಕ ಮತ್ತು ಪರ್ವ ಮಾಡುತ್ತಿದ್ದರು... ಈ 2 ದಿವಸ ನಾಗನಿಗೆ ಅಭಿಷೇಕ ಮತ್ತು ದೈವಗಳಿಗೆ ಪರ್ವ ಆಗುವ ತನಕ ಅಪ್ಪ ಏನೂ ತಿನ್ನುತ್ತಿರಲಿಲ್ಲ.. ಸಾಧಾರಣ 10.30_11 ಗಂಟೆ ವರೆಗೆ ಏನೂ ತಿನ್ನುತ್ತಿರಲಿಲ್ಲ ಬೆಳಗ್ಗೆ ಕುಡಿದ 2 ಲೋಟ ಬಿಸಿ ನೀರು ಮಾತ್ರ. ಮಡಿ ಬಟ್ಟೆ ಸುತ್ತಿ ರಡಿಯಾಗಿ ಮದ್ದಡ್ಕ ರಘುರಾಮ ಭಟ್ ರನ್ನು ಕಾಯುತ್ತಿದ್ದರು.. ಫೆಬ್ರವರಿಯಲ್ಲಿ ಪರ್ವ ಮಾಡುತ್ತಿದ್ದದ್ದು ಮದ್ದಡ್ಕ ದ ರಘುರಾಮ ಭಟ್ಟರು... ಈ ದೈವ ದೇವರುಗಳ ಮೇಲೆ ಇದ್ದ ಶ್ರದ್ಧೆ ಮತ್ತು ಭಕ್ತಿ ಅಪ್ಪನನ್ನು ಮರಣ ಹೊಂದುವ ಮೊದಲು ಮನೆ ವರೆಗೆ ತಲುಪಿಸಿದ್ದು. ಮಕ್ಕಳಾದ ನಮಗೆ ಅವರ ಸೇವೆ ಮಾಡುವ ಭಾಗ್ಯ ಒದಗಿಸಿದ್ದು.... ಅಪ್ಪನ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ.. ಅಪ್ಪ ಮಾಡಿದ ರೀತಿ ನಿತ್ಯ ಪೂಜಾ ವಿಧಿ ವಿಧಾನಗಳನ್ನು ಮಾಡುತ್ತಾ ಇದ್ದೇವೆ..... ಅಪ್ಪನೇ ಆದರ್ಶ... ಅಪ್ಪನ ನೆನಪೇ ದಾರಿದೀಪ.... ಅಪ್ಪನನ್ನು ಈ ಬರಹದ ಮೂಲಕ ನೆನಪು ಮಾಡಿಕೊಂಡು ಹಾಗೂ ಭಕ್ತಿ ಪೂರ್ವಕ ಭಾಷ್ಪಾಂಜಲಿ ಅರ್ಪಿಸುತ್ತಿದ್ದೇನೆ ...
Comments