Posts

Newest post

ಅಪ್ಪನ ಶಾಂತ ಸ್ವಭಾವ ದ ಬಗ್ಗೆ ಒಂದು ಬರಹ!

Image
ಅಪ್ಪ ಮತ್ತು ಅಮ್ಮ  ಅಪ್ಪ ನಿಗೆ ಕೋಪ ಬರುತ್ತಿದ್ದುದು ಕಡಿಮೆ..... ನಾವು ವಜ್ರಾಂಗಿಯಲ್ಲಿ ಇರುವಾಗ ತಂದೆಗೆ ಸಿಟ್ಟು, ಕೋಪ ಬರುತ್ತಿತ್ತು. ಆದ್ರೆ ಅದು ಕ್ಷಣಿಕ... ನಾವು ದೇರ್ಜಾಲಿನಲ್ಲಿ ಜಾಗ ಮಾಡಿದ ನಂತ್ರ ಅಪ್ಪನಿಗೆ ಕೋಪ ಬಂದದ್ದೆ, ಅಪರೂಪ, ನಮ್ಮ ಮನೆ ಸುತ್ತ ಮುತ್ತ ತಂದೆಗೆ ಎಲ್ಲರೂ ಸ್ನೇಹಿತರೆ... ತಂದೆ ಯಾರಲ್ಲೂ ಜಗಳ ಮಾಡಿದವರಲ್ಲ, ಯಾರಾದರೂ ತಂದೆಗೆ ಹಿಡಿಸದ ಮಾತುಗಳು ಹೇಳಿದರೆ, ಅವರ ಜೊತೆ ಮಾತನ್ನೇ ಬಿಡುತ್ತಿದ್ದರು... ತಂದೆ ಅವ್ರ ಜೊತೆ ಮಾತು ಆಡುತ್ತಿರಲಿಲ್ಲ.. ಅವರ ವಿಷ್ಯ ಕೇಳುತ್ತಿರಲಿಲ್ಲ... ತಾನಾಯಿತು ತನ್ನ ಕೆಲಸ ಆಯಿತು ಅಂತ ಇದ್ದವರು ತಂದೆ.ಶಾಂತ ಸ್ವಭಾವದವರು ಅವರು ... ಕೆಟ್ಟ ಬೈಗುಳಗಳು ಅವರ ಬಾಯಿಂದ ಬರುತ್ತಿರಲಿಲ್ಲ.ಕೆಲವು ವರ್ಷಗಳ ಹಿಂದೆ ತಂದೆಯನ್ನು ಒಬ್ಬ ವ್ಯಕ್ತಿ  ಏಕವಚನದಲ್ಲಿ ಕರೆದಿದ್ದ. ತಂದೆಯಲ್ಲಿ ಇದರ ಬಗ್ಗೆ ಹೇಳಿದೆ. ಅದಕ್ಕೆ ಅವರು ಹೇಳಿದ್ದು,"ದೇವರೇ ಅವನಿಗೆ ಬುದ್ದಿ ಕೊಡಲಿ, ನೀನು ಸುಮ್ಮನಿರು" .. ನೀನು ಆತನಲ್ಲಿ ಮಾತನಾಡಬೇಡ ಅಂದಿದ್ದರು . ಇಂದಿನವರೆಗೂ ನಾನು ಆ ವ್ಯಕ್ತಿಯಲ್ಲಿ ಮಾತನಾಡುತ್ತಿಲ್ಲ . ಒಂದು ದಿನ ನಮ್ಮ  ಜಾಗದಿಂದ  ಆ ವ್ಯಕ್ತಿ ಸೊಪ್ಪು ಕಡಿದಿದ್ದ , ಇದಕ್ಕೆ ನಾನು ವಿರೋಧಿಸಿದ್ದೆ, ಆ ದಿನ ರಾತ್ರಿ ಆ ವ್ಯಕ್ತಿ ಆಯುಧ (ಇಂತಹ ಹಲವು ಆಯುಧ ನನ್ನಲ್ಲಿ ಇದೆ ಅಂದಿದ್ದೆ) ಹಿಡಿದು ಆತನ ಪರಿವಾರದ ಜೊತೆ ಬಂದಿದ್ದ. ತಂದೆ ಆತನಲ್ಲಿ ಈ ಸಮಯದಲ್ಲಿ ಈ ರೀತಿ ಮನೆಗೆ...

ದೇವರ ಮೇಲೆ ಅಪ್ಪನಿಗಿದ್ದ ಭಕ್ತಿ ಮತ್ತು ಶ್ರದ್ಧೆ!???

Image
ಶುಕ್ರವಾರದ ಭಜನೆ ಮಾಡುವ ಸಮಯ  ದೇವರ ಮೇಲೆ ಮತ್ತು ದೈವಗಳ ಮೇಲೆ ಅಪ್ಪನಿಗೆ ಅಪಾರ ಭಕ್ತಿ ಮತ್ತು ಶ್ರದ್ಧೆ ಇತ್ತು.. ದಿನಕ್ಕೆ 2 ಬಾರೀ ಜಾಗದ ದೈವಗಳಿಗೆ ಮತ್ತು ಮನೆಯ ಆರಾಧ್ಯ ದೇವರಿಗೆ ನಮಸ್ಕಾರ ಮಾಡಿ ಪ್ರಾರ್ಥಿಸುತ್ತಿದ್ದರು. ಬೆಳಿಗ್ಗೆ ನಿತ್ಯಕರ್ಮಗಳನ್ನು ಮುಗಿಸಿ ದೇವರಿಗೆ ಹೂ ಕೊಯ್ದು. ನಂತರ ಸ್ನಾನ ಮಾಡಿ.. ದೇವರಿಗೆ ತಾಮ್ರದ ಕೊಡಪಾನದಲ್ಲಿ ನೀರು ತುಂಬಿಸಿ ತರುತ್ತಿದ್ದರು.ಈ ತಂಬಿಗೆಯಲ್ಲಿ ದೇವರ ಕೋಣೆಗೆ ನೀರು ತೆಗೆದು ಕೊಂಡು ಹೋಗುವ ಮೊದಲು ತುಳಸಿ ಕಟ್ಟೆಗೆ ಮತ್ತು ತುಳಸಿ ಗಿಡಕ್ಕೆ 2 ರಿಂದ 4 ಕೊಡಪಾನ ನಿತ್ಯ ನೀರು ಎರೆಯುತ್ತಿದ್ದರು. ನಂತರ ಕೊಡಪಾನ ದಲ್ಲಿ ನೀರು ದೇವರ ಕೋಣೆಗೆ ಕೊಂಡು ಹೋಗಿ ಅದಿಕೆ ತಾಮ್ರದ ಹರಿವಾಣ ಮುಚ್ಚಿ ಇಡುತ್ತಿದ್ದರು. ದೇವರ ಪೂಜೆಗೆ ಬೇಕಾದ ಸಾಮಾಗ್ರಿಗಳು ಎಲ್ಲವನ್ನೂ ತಂದೆ ತಂದಿದ್ದರು... ದೇವರಿಗೆ ಪೀಠ (ಹಲಸಿನ ಮರದ್ದು) ಆರತಿ ತಟ್ಟೆಗಳು, ಹರಿವಾಣ ಇತ್ಯಾದಿಗಳು. ದೇವರ ಫೋಟೋಗಳನ್ನು ಶುಚಿ ಮಾಡಿದ ಬಳಿಕ ಹೂವನ್ನು ಇಟ್ಟು.. ಊದುಬತ್ತಿ ಹೊತ್ತಿಸಿ. ಆರತಿ ಮಾಡಿ ಜಪ ಮಾಡುತ್ತಿದ್ದರು. ನಂತರ ನಿತ್ಯವೂ ಮನೆಯಲ್ಲಿರುವ ವಾಹನಕ್ಕೆ ಹೂವನ್ನ ಇಟ್ಟು ದೂಪಾರತಿ ಮಾಡುತ್ತಿದ್ದರು. ನಂತರ ದೇವರಕೊಣೆಗೆ ಬಂದು ದೇವರಿಗೆ ನಮಿಸಿ... ಮನೆಯ ಹೊರಗೆ ಬಂದು ದೈವಗಳಿಗೆ ನಮಿಸಿ. ದೇವರ ಕೋಣೆಗೆ ಹಿಂದಿರುಗುತ್ತಿದ್ದರು.. ಇದಕ್ಕೆ ನಿತ್ಯವೂ ಸರಿ ಸುಮಾರು 1 ಗಂಟೆ ಸಮಯ ಮೀಸಲಿಟ್ಟಿದ್ದರು ಅಪ್ಪ. ಬೆಳಗಿನ ನಿತ್ಯ ಪೂಜಾ ವಿಧಿ ವಿ...

Whats app ಗ್ರೂಪಾಯಣ, ಗ್ರೂಪ್ ಒಂದು ಮೂರು ಬಾಗಿಲು?

Whats app ಗ್ರೂಪಾಯಣ... Zukerberg ಈ whats app ನಲ್ಲಿ ಹೆಚ್ಚಿನ ಫೀಚರ್ ಸೇರಿಸೋದು ಖುಷಿ ವಿಚಾರ.ಆದ ಕಾರಣವೇ whats app ಇಷ್ಟು ಪಾಪ್ಯುಲರ್ ಆಗಲು ಕಾರಣ.ಪ್ರತಿಯೊಬ್ಬರ ಮೊಬೈಲ್ನಲ್ಲೂ news app, ಡಿಕ್ಷನರಿ,games ಇಲ್ಲದೇ ಇದ್ರೂ ಈ whats app ಅಂತೂ ಇದ್ದೆ ಇರುತ್ತದೆ. ಈಗೀಗ ಈ app ಡೀಫಾಲ್ಟ್ ಆಗಿ ಇನ್ಸ್ಟಾಲ್ ಆಗಿರುತ್ತದೆ. ಈ ಜೂಕರ್ ಬರ್ಗ್ whats app ಗ್ರೂಪ್ ಅಡ್ಮಿನ್ ಗಳಾಗಲು ಕೆಲವು ಕಂಡಿಷನ್ ಹಾಕಬೇಕು ಅಲ್ವಾ. ಇದರ ಜೊತೆ ಇನ್ನು ಕೆಲವು ಸೇರಿಸಲಿ ಇಲ್ಲದಿದ್ರೆ ಅರ್ಹತೆ ಇಲ್ಲದವ ಗ್ರೂಪ್ ತೆರೆದು ಸಾತ್ವಿಕರಿಗೆ ಬುದ್ದಿ ಹೇಳುವ ಪರಿಸ್ಥಿತಿ ಬರಬಹುದು ಅಲ್ವಾ. 1. ಅಡ್ಮಿನ್ ಗಳು ಯಾವುದೇ ಪೋಲಿಸ್ ಸ್ಟೇಷನ್ ಗಳಲ್ಲಿ ಕೇಸ್ ಹೊಂದಿರಬಾರದು. 2.ಸಿವಿಲ್ or ಕ್ರಿಮಿನಲ್ ಕೇಸ್ ಇರುವವರು ಅನರ್ಹರು  3.ಅಡ್ಮಿನ್ ಗಳು ಬ್ಯಾಂಕ್ ಗಳಲ್ಲಿ ಸಾಲ ತೆಗೆದು overdue ಆಗಿ auction ನೋಟಿಸ್ ವಗೈರೆ ಬಂದಿರಬಾರದು.(BANK FRAUD)  4. ಸಮಾಜದ ಸ್ವಾಸ್ಥ್ಯ ಹದಗೆಡಲು ಕಾರಣೀಕರ್ತನಾಗಿರಬಾರದು . ಇಷ್ಟು T & C ಇಡಬೇಕು ರೀ... ಇಷ್ಟು ಅರ್ಹತೆ ಇಲ್ಲದೆ ಇದ್ದವರು whatsapp ಗ್ರೂಪ್ ನ ಸಾತ್ವಿಕ/ಹಿರಿಯ ಸದಸ್ಯರಿಗೆ ಬುದ್ಧಿವಾದ ಹೇಳಲೇ ಬಾರದು.. ಅವರಿಗೆ ಅರ್ಹತೆ ಇಲ್ಲ ಏನಂತೀರಿ.. ಈಗಿನ WHATS APP ಗ್ರೂಪ್ ಗಳಲ್ಲಿ ಗ್ರೂಪ್ ನ ಒಳಗೆ ಹಲವು ಗ್ರೂಪ್ ಗಳಿರುತ್ತವೆ. ಅದರಲ್ಲಿ ಕೂಡ ಹಲವು ವಿಧದ ಗಳು.. 1. ಬೇರೆ ಬೇರೆ ಪಕ್ಷದ ಜನರು...

17 ರ ವರೆಗೆ ಸಂಗ್ರಹಿಸಿದ ಹಣ, ಅಪ್ಪನ ಹವ್ಯಾಸ ಮತ್ತು ಅಲ್ಲಿಯ ವರೆಗಿನ ಅಪ್ಪನ ವ್ಯವಹಾರದ ಬಗ್ಗೆ ಒಂದು ಲೇಖನ...

ಅಪ್ಪನ ಲೆಕ್ಕಾಚಾರ ಯಾವಾಗಲೂ ಪರ್ಫೆಕ್ಟ್. ಯಾರೇ ಹಣ ಕೊಟ್ಟಿದ್ದರು ಅವರ ಹೆಸರು ಮತ್ತು ಯಾಕೆ ಕೊಟ್ಟದ್ದು ಅನ್ನೋದನ್ನು ಚೀಟಿಯಲ್ಲಿ ಬರೆದು ಹಣ ದ ಜೊತೆ ಚೀಟಿಯನ್ನು ಇಟ್ಟು ರಬ್ಬರ್ ಬ್ಯಾಂಡ್ ಹಾಕುತ್ತಿದ್ದರು. ಜೊತೆಗೆ ಸಣ್ಣ ಪುಸ್ತಕದಲ್ಲಿ ಬರೆದು ಇಡುತ್ತಿದ್ದರು.  ಏನು ತಂದರೂ ಮತ್ತು ಕೊಟ್ಟರೂ ಬರೆದು ಇಟ್ಟಿರುತ್ತಿದ್ದರು. ಯಾವುದೇ ದಾಖಲೆ ಇರಲಿ ಅದನ್ನು ಜಾಗೃತೆ ವಹಿಸಿ ಫೈಲ್ ಮಾಡಿ ಇಡುತ್ತಿದ್ದರು.. ತಂದೆಗೆ ಕಾಯಿನ್ ಕಲೆಕ್ಷನ್ ಹವ್ಯಾಸ ಇತ್ತು. ಹಲವು ದೇಶದ ಕಾಯಿನ್ ಮತ್ತು ಕರೆನ್ಸಿ ತಂದೆಯ ಬಳಿಯಿದೆ . ತಂದೆಯ ಮದುವೆ ಕಾಗದ, ವಧೂ ಗೃಹ ಪ್ರವೇಶದ ಇನ್ವಿಟೇಶನ್, ಫೋಟೋ ಗಳು ಈಗಲೂ  ಜೋಪಾನವಾಗಿ ಇದೆ.  17 ರಂದು ತಂದೆ ಸಂಗ್ರಹಿದ ಹಣದ ಲೆಕ್ಕ ಸಿಂಪ್ಯೂಟರ್ ನ ಟೋಟಲ್ ನಲ್ಲಿ ಒಂದು ರೂಪಾಯಿ ವ್ಯತ್ಯಾಸ ಇರಲಿಲ್ಲ.. ಬ್ಯಾಗ್ ನಲ್ಲಿ ಇರುವ ದುಡ್ಡಿಗೂ ದಾಖಲೆ ಇಟ್ಟಿದ್ದರು ಅಪ್ಪ. ಯಾರು ಡೆಪಾಸಿಟ್ ಗೆ ಕೊಟ್ಟದ್ದು, ಅವರ ಹೆಸರನ್ನು ಬರೆದು ಇಟ್ಟಿದ್ದರು ಅಪ್ಪ... ಇದರಿಂದ ಅದನ್ನು ತಲುಪಿಸುವವರಿಗೆ ತಲುಪಿಸಲು ನಮಗೆ ಕಷ್ಟ ವಾಗಲಿಲ್ಲ. ತಂದೆಯ ಬ್ಯಾಗ್ ನ ಒಂದು wallet ತೆಗೆದು ನೋಡುವಾಗ ಒಂದು ಬ್ಲಾಂಕ್ ಚೆಕ್ ಸಿಕ್ಕಿತ್ತು. ಅದರಲ್ಲಿ sign ಹಾಕಿತ್ತು, ಹಣ ದ ವಿವರ ಬರೆದಿರಲಿಲ್ಲ.... ತಂದೆ ಎಷ್ಟು ಪ್ರಾಮಾಣಿಕರು ಅನ್ನುವುದಕ್ಕೆ ಇದೊಂದು ಉದಾಹರಣೆ... ಇದೆಲ್ಲವನ್ನೂ 19 ರ ಬೆಳಿಗ್ಗೆ ಸೊಸೈಟಿ ಗೆ ಹೋಗಿ ಒಪ್ಪಿಸಿದ್ದೇವೆ... 17 ರ ...

ಅಪ್ಪನ ಕೆಲಸದಲ್ಲಿ ನಮ್ಮ ಜವಾಬ್ದಾರಿ ಏನು?

Image
ಬೆಳಿಗ್ಗೆ 6.30ಕ್ಕೆ ಏಳುತ್ತಿದ್ದ ತಂದೆ ನಿತ್ಯಕರ್ಮಗಳನ್ನು ಮುಗಿಸಿ ಮೊದಲು ಒಂದು ಲೋಟ ಬಿಸಿ ನೀರು ತಪ್ಪದೆ ಕುಡಿಯುತ್ತಿದ್ದರು. ನಂತರ ಮನೆ ಸುತ್ತ ಸಿಮೆಂಟ್ ಹಾಕಿದ ಜಾಗವನ್ನು ನಿತ್ಯ ಗುಡಿಸಿ ನೀಟಾಗಿ ಇಡುತ್ತಿದ್ದರು. ನಂತರ ದೇವರಿಗೆ ಹೂ ಕೊಯ್ಯುವ ಕೆಲಸ. ಇದೆಲ್ಲ ಆಗಿ ತಂದೆ ಬುಧವಾರ ಮತ್ತು ಆದಿತ್ಯ ವಾರ ಶೇವಿಂಗ್ ಮಾಡುತ್ತಿದ್ದರು... ವಾರದಲ್ಲಿ 2 ದಿವಸ ಶೇವಿಂಗ್... ಸೋಮವಾರ ಮತ್ತು ಶುಕ್ರವಾರ ರಾತ್ರಿ 2 ದಿವಸ ತನ್ನೆಲ್ಲ ಬಟ್ಟೆಗಳಿಗೆ ಐರನ್ ಮಾಡುತ್ತಿದ್ದರು. ತಂದೆ ಯಾವಾಗಲೂ ನೀಟ್ & ಕ್ಲೀನ್. ಐರನ್ ಮಾಡಿದ ಬಟ್ಟೆಯೇ ಹಾಕುವುದು. ನೋಡಲು ಒಂದೇ ರೀತಿಯ ಬಣ್ಣದ ಬಟ್ಟೆ ಹಾಕಿದ್ರು.30 ಜೊತೆಗಿ0ತ ಹೆಚ್ಚು ಬಟ್ಟೆ ತಂದೆಯ ಬಳಿ ಇತ್ತು. ತಂದೆ raymonds,siyarams ಬ್ರಾಂಡ್ ನ ಬಟ್ಟೆಯನ್ನೇ ಸ್ಟಿಚ್ ಮಾಡಿಸುತ್ತಿದ್ದರು, ಬೆಳಗಿನ ಕೆಲಸ ಆಗುವಾಗ 8.30 ಆಗುತಿತ್ತು. ನಂತರ ಅರ್ದ ಗಂಟೆ ಸ್ನಾನ. ಅದ್ರಲ್ಲೂ ತಂದೆಯ ಇಷ್ಟದ ಸೋಪ್ pears. ಸ್ನಾನ ಮುಗಿಸಿ ಮಡಿ ಉಟ್ಟು ದೇವರ ಫೋಟೋ ಕ್ಲೀನ್ ಮಾಡಿ. ದೇವರ ಕೋಣೆ ಯಲ್ಲಿ ಫೋಟೋ ಗೆ ಹೂವನ್ನು ಇಟ್ಟು. ಜಪ ಮಾಡಿ . ಕಾರ್ ಮತ್ತು ಸ್ಕೂಟರ್ ಗೆ ಹೂ ಇಟ್ಟು , ಕೈ ಮುಗಿದು ನಂತರ ದೇವರ ಕೋಣೆಯಲ್ಲಿ ದೇವರ ಪ್ರಾರ್ಥನೆ, ನಂತರ ಹೊರಗಡೆ ಬಂದು ಜಾಗದ ದೈವಗಳಿಗೆ ಕೈ ಮುಗಿದು ಬರುತ್ತಿದ್ದರು. ನಂತರ ತಾಯಿ ದಿನಾಲೂ ಬೆಳಿಗ್ಗೆ ಊಟಾ ಮತ್ತು ಗೋಧಿ ದೋಸೆ/ನೀರುದೋಸೆ/ಸಜ್ಜಿಗೆ/ಉಂಡೆ ಇತ್ಯಾದಿ ಮಾಡಿಟ್ಟಿರುತ್ತಿದ್ದರು ...

ಅಪ್ಪನ ಕಾಯಕ ನಾ ಕಂಡಂತೆ.....

Image
ಸೀತಾರಾಮ ಭಟ್  ಸುಮಾರು 40 ವರ್ಷದ ಹಿಂದೆ ತಂದೆ ದೈನಿಕ ಠೇವಣಿ ಸಂಗ್ರಾಹಕ (pigmy collector) ಕೆಲಸಕ್ಕೆ ಸೇರಿದರು... ಬೆಳಿಗ್ಗೆ 9.45 ಕ್ಕೆ ಮನೆಯಿಂದ ಹೊರಟರೆ 10.30 ಕ್ಕೆ ಬ್ಯಾಂಕ್ ಗೆ ತಲುಪಿ.10.30 ರಿಂದ 12.30ರ ವರೆಗೆ ಆಫೀಸ್ ನಲ್ಲಿ ಕೆಲಸ.. 12.30ರಿಂದ5 ಗಂಟೆ ವರೆಗೆ ಪಿಗ್ಮಿ ಕಲೆಕ್ಷನ್ ಮಾಡುತ್ತಿದ್ದರು. ಈ ಸಮಯದಲ್ಲಿ ಹಲವಾರು ಒಳ್ಳೆಯ ಗೆಳೆಯರನ್ನು ಪಡೆದಿದ್ದರು ಅಪ್ಪ. ತನ್ನ ಜೀವಿತದ ಕೊನೆಯವರೆಗೂ ಅಂದರೆ ಜನವರಿ 17ರ ವರೆಗೂ ಪ್ರಾಮಾಣಿಕವಾಗಿ ದುಡಿದವರು.... ನಾವು 2005 ಕ್ಕಿಂತ ಮೊದಲು ವಜ್ರಾಂಗಿ ಎಂಬಲ್ಲಿ ಇದ್ದೆವು.. ಅಲ್ಲಿನ ಮನೆ, ದನದ ಕೊಟ್ಟಿಗೆ ಎಲ್ಲಾ ತಂದೆಯ ಬೆವರು ಹನಿ ಸುರಿಸಿ ಗಳಿಸಿದ ದುಡ್ಡಿನಿಂದಲೆ ಆಗಿದ್ದು.... 2003 ರಲ್ಲಿ ಯೇ ನಮ್ಮ ಮನೆಯಲ್ಲಿ tv, ಗ್ಯಾಸ್, ಫೋನ್ ಇತ್ತು . ಆ ಸಮಯದಲ್ಲಿ ಅದು ಅಪರೂಪ. ವಜ್ರಾಂಗಿ ಯ ಜಾಗ ಸಣ್ಣದಾಯಿತು, ಎಂಬ ಕಾರಣಕ್ಕೆ ಆ ಜಾಗವನ್ನು ಕೊಟ್ಟು, 2005ರಲ್ಲಿ “ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಸಮೀಪದ ದೇರ್ಜಾಲು”   ಎಂಬಲ್ಲಿ 6 ಎಕ್ರೆ ಜಾಗ ಖರೀದಿಸಿದೆವು... ಜಾಗ ಖರೀದಿ ಮಾಡಿದ ಸಮಯ ತಂದೆಯ ಸಂಬಳ ನಮಗೆ ಆಧಾರ ಆಗಿತ್ತು. ಆ ಕಾಲಕ್ಕೆ ತಂದೆಗೆ ಒಳ್ಳೆಯ ಸಂಬಳ ಸಿಗುತಿತ್ತು. ಜಾಗ ಖರೀದಿಸಲು ಮುಂಡ್ರ ಕಜೆ ಅಜ್ಜ ನವರ ಸಹಾಯ ಕೂಡ ಇದೆ... ತಂದೆ ದುಡಿಮೆ ಆವಾಗ ನಮಗೆ ಆನೆ ಬಲ ತಂದುಕೊಟ್ಟಿತ್ತು.. ಹಂತ ಹಂತವಾಗಿ ಜಾಗ ವನ್ನು ಅಭಿವೃದ್ಧಿ ಪಡಿಸಿದೆವು... ಮಧ್ಯಮ ವರ್ಗದ ಸು...

ಜನವರಿ 17 2023 ರ ರಾತ್ರಿ 8 ರ ನಂತರ ಅಪ್ಪನಿಗೆ ಏನಾಯಿತು??

Image
ಸೀತಾರಾಮ ಭಟ್   ಬೆಳಿಗ್ಗೆ 9.30 ಸುಮಾರಿಗೆ ತಂದೆ ಯಾವಾಗಲೂ ಕೆಲಸಕ್ಕೆ ಹೋಗುವ ಸಮಯ. ಎಂದಿನಂತೆ ಅಂದೂ ಕೂಡಾ  ಪರಪ್ಪು ಗೆ ಮಗನ ಜೊತೆ ಕರೆದು ಕೊಂಡು ಹೋಗಿ ಬಿಟ್ಟು ಬಂದೆ... ಸಂಜೆ 5.45  ತಂದೆ ಬರುವ ಸಮಯ ಅಂದೂ ಎಂದಿನಂತೆ ಕರೆದು ಕೊಂಡು ಮನೆ ಹತ್ತಿರದ ಅಂಗಡಿಯಲ್ಲಿ ಪಿಗ್ಮಿ ಹಣ ಕಲೆಕ್ಟ್ ಮಾಡಲು ಮಗ ಮತ್ತು ತಂದೆಯನ್ನು ಬಿಟ್ಟು ನಾನು ಅಲ್ಲೇ ಹತ್ತಿರದ ಮನೆಯಿಂದ ಹಾಲು ತೆಗೆದು ಕೊಂಡು ಮತ್ತೆ ತಂದೆ ಮತ್ತು ಮಗನನ್ನು ಕರೆದು ಕೊಂಡು ಬಂದು ಮನೆಗೆ ಬಿಟ್ಟೆ.. ಇದೆಲ್ಲ ಎಂದಿನಂತೆ ಇತ್ತು.... ಮನೆಗೆ ತಂದೆ ಮತ್ತು ಮಗನನ್ನು ಬಿಟ್ಟು ನಮ್ಮ ನೆರೆ ಮನೆಯವರ ಬೈಕ್ ನೋಡಲು ಹೋಗಿದ್ದೆ.. ನಮ್ಮ ಸ್ಕೂಟರ್ ಕೊಟ್ಟು ಬೈಕ್ ತೆಗೆಯುವ ಯೋಚನೆ ಇತ್ತು. ಅಲ್ಲಿಂದ ಮನೆಗೆ ಬರುವಾಗ ಸಮಯ ಸುಮಾರು 8ಗಂಟೆ.. ಈ ಸಮಯ ತಂದೆ ಹೊಟ್ಟೆ ಹತ್ತಿರ ನೋವು ಅಂತಿದ್ದರು.. ಅದು ಗ್ಯಾಸ್ಸ್ಟ್ರಿಕ್ ನಿಂದಾ ಆಗಿರಬಹುದು ಅಂದುಕೊಂಡೆವು. ಜೊತೆಗೆ ತೇಗು ಕೂಡ ಬರುತಿತ್ತು. ಕೂಡಲೇ ಡಾಕ್ಟರ್ ನ ಬಳಿ ಕರೆದು ಕೊಂಡು ಹೋಗುವ ಅಂದೆ ಅಮ್ಮನಲ್ಲಿ.. ತಂದೆ ಕೂಡ ಹೊರಟರು. ತಮ್ಮ ಡಾಕ್ಟರಿಗೇ ಫೋನ್ ಮಾಡಿದ.. ಡಾಕ್ಟರ್ ಕ್ಲಿನಿಕ್ ನಲ್ಲಿ ಇಲ್ಲ ಅಂದರು.. ಹಾಗಾದ್ರೆ ಮನೆಗೆ ಬರಲೇ ಅಂದ ತಮ್ಮ.. ಡಾಕ್ಟರ್ ಬನ್ನಿ ಅಂದ್ರು... ಕೂಡಲೇ ಮನೆಯಿಂದ ಹೊರಟೆವು.. ದಾರಿಯಲ್ಲಿ ತಂದೆಯ ಜೊತೆ ಮಾಮೂಲು ಹರಟೆ ತಮಾಷೆ ಇತ್ತು.. ತಂದೆ ಕೂಡ ಆರಾಮದಲ್ಲಿ ಇದ್ದರು.. ಮನೆಯಲ್ಲಿ ಇದ್ದ ನೋವು ಉಪ್ಪಿನಂಗಡಿ...